ಬೆಳಗಾವಿಯಲ್ಲಿ ಕೃಷ್ಣಾಮೃತಮ್ - ನ ಮೇ ಭಕ್ತಃ ಪ್ರಣಶ್ಯತಿ
ಹುಬ್ಬಳ್ಳಿಯ ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಗ್ರೌಂಡ್ಸ್ ನಲ್ಲಿ ಸಂಸ್ಕೃತ ಭಾರತೀ -ಕರ್ಣಾಟಕಮ್ ಉತ್ತರಮ್ ಪ್ರಾಂತದ ವತಿಯಿಂದ ಕಳೆದ ವರ್ಷ ಗೀತಾಮೃತಮ್ -ಸಂಭವಾಮಿ ಯುಗೇ ಯುಗೇ* ಕಾರ್ಯಕ್ರಮ ಡಿಸಂಬರ್ 15 , 2024 ರಂದು ನಡೆಯಿತು. 1008 ಜನ ಭಗವದ್ಗೀತೆಯ 12 ಮತ್ತು 15 ನೇ ಅಧ್ಯಾಯಗಳನ್ನು ಪಠಿಸಿದರು, ಸುಮಾರು 2500 ಜನ ಉಪಸ್ಥಿತರಿದ್ದು ಈ ಸತ್ಕಾರ್ಯವು ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಈಗ ಮತ್ತೊಮ್ಮೆ ಈ ಶುಭಘಳಿಗೆ ಸಮೀಪಿಸಿದೆ. ಈ ವರ್ಷ ಡಿಸೆಂಬರ್ 7,2025 ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ ಐತಿಹಾಸಿಕ ಕೃಷ್ಣಾಮೃತಮ್ - ನ ಮೇ ಭಕ್ತಃ ಪ್ರಣಶ್ಯತಿ.
ಗೀತೆಯ 12 ಮತ್ತು 15 ನೇ ಅಧ್ಯಾಯಗಳ ಸಾಮೂಹಿಕ ಪಠಣ 1008 ಸದ್ಭಕ್ತರಿಂದ. ಗೀತಾ ಸ್ಪರ್ಧೆಗಳು, ಉಪನ್ಯಾಸಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ರಸಪ್ರಶ್ನೆ ಮತ್ತು ಗೀತಾ ಅಂತ್ಯಾಕ್ಷರಿ ಮತ್ತು 18 ಅಧ್ಯಾಯಗಳನ್ನು ಕಂಠಸ್ಥ ಮಾಡಿದವರಿಗೆ ಸನ್ಮಾನ ಎಲ್ಲವೂ ಒಂದೇ ಸ್ಥಳದಲ್ಲಿ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಿ ಶ್ರೀ ಕೃಷ್ಣ ನ ಕೃಪೆಗೆ ಪಾತ್ರರಾಗಿ.
ಪಾಲ್ಗೊಳ್ಳಲು ಸಂಪರ್ಕಿಸಿ-
ಬೆಳಗಾವಿ - 7892261499, 9916503620, 7259114553
ಚಿಕ್ಕೋಡಿ - 9480003701, 7022598192.
- Post By : North Karnataka
- |
- 26-04-2025
- |













.jpeg)















